ಓ ಕಬ್ಬಿಗನೆ, ನಿನ್ನೊಳಿಹ ಕಲೆಗೆ ಶಕ್ತಿಯಿದೆ ಜಡವ ಚೇತನಗೊಳಿಪ ದಿವ್ಯತರ ಮುಕ್ತಿಯಿದೆ ಮನುಜರಿಗೆ ಸೊಗಮೀವ ಕರ್ತವ್ಯವೊಂದೆ ನಿನ್ನದೆಂದರಿಯದಿರು ; ನಿನ್ನ ಕಲೆಯಿಂದೆ ನೂರಾರು ಆತ್ಮಗಳು ಜಡತನದ ಬಲೆಯಿಂದೆ ಬಿಡುಗಡೆಯ ಹೊಂದುವುವು - ಕುವೆಂಪು

Tuesday, January 7, 2014

ಯುವ ಕಾವ್ಯ ಪುರಸ್ಕಾರ

ಕಾಜಾಣವು ಹಲವು ಹೊಸ ಪ್ರತಿಭೆಗಳಿಗೆ ಆವರಣ ಮತ್ತು ಅನಾವರಣ ಆಗುತ್ತಾ ಪುಟ್ಟ ಹೆಜ್ಜೆಗಳಿಂದ ದಿಟ್ಟ ಹೆಜ್ಜೆಗಳೆಡೆಗೆ ಸಾಗುತ್ತಿದೆ. ಈ ನಿಟ್ಟಿನಲ್ಲಿ ನಾಡಿನ ಆರೋಗ್ಯಪೂರ್ಣ,ಸೃಜನಶೀಲ ಮತ್ತು ಚಿಂತನಾಶೀಲ ಮನಸ್ಸುಗಳು ನಮ್ಮ ಜೊತೆಯಾಗುತ್ತಲೇ ಬರುತ್ತಿರುವುದು ನಮ್ಮ ಕಾಜಾಣಕ್ಕೆ ಜೀವಂತಿಕೆಯ ಶಕ್ತಿಯನ್ನು ಕೊಟ್ಟಿದೆ.ಅದರೊಟ್ಟಿಗೆ ಬಳಗದೊಳಗಿನ ಕಾಜಾಣಗಳ ಆಸಕ್ತಿ ಪ್ರತಿಭೆ ಮತ್ತು ಶ್ರಮಕಟ್ಟುವ ಕ್ರಿಯೆಗೆ ಸ್ಪಷ್ಟತೆ ಕೊಡುತ್ತಿದೆ.

ಉಮಾಶ್ರೀ ಸಿನಿಮೋತ್ಸವ ಸಾಕಾರಗೊಂಡು ಈಗ ಕಾವ್ಯಕಮ್ಮಟ2014 ಇದರ ಜೊತೆಗೆ ಈ ಬಾರಿಯಿಂದ "ಯುವ ಕಾವ್ಯ ಪುರಸ್ಕಾರ" ಕೊಡಮಾಡುತ್ತಿದೆ.


No comments:

Post a Comment