“ಕಮ್ಮಟದಲ್ಲಿ ನಿಜಕ್ಕೂ ಆದದ್ದೇನು.
ಇದೊಂದು ಬಹುಮುಖ್ಯವಾದ ಪ್ರಶ್ನೆ. ಕಮ್ಮಟದ ಮೊದಲ ದಿನ ಕವಿಗೋಷ್ಠಿಯೊಂದಿಗೆ ಆರಂಭವಾಯಿತು. ಮೊದಲೇ ಹೆಸರು ನೊಂದಾಯಿಸಿಕೊಂಡಿದ್ದ ಶಿಬಿರಾರ್ಥಿಗಳು ಅಲ್ಲಿ ಕವನ ವಾಚನ ಮಾಡಿದರು. ಈ ಕವಿಗೋಷ್ಠಿಯು ಸದ್ಯದಲ್ಲೇ ದೂರದರ್ಶನದಲ್ಲಿ ಪ್ರಸಾರವಾಗುತ್ತಿರುವುದು ಹೆಗ್ಗಳಿಕೆ ಎಂದುಕೊಳ್ಳುತ್ತೇನೆ. ನಂತರ ಸಂಪನ್ಮೂಲ ವ್ಯಕ್ತಿಗಳಾದ ಅಗ್ರಹಾರ ಕೃಷ್ಣಮೂರ್ತಿ, ಮುಕುಂದರಾಜ್, ಶಿವಾರೆಡ್ಡಿ ಶಿಬಿರಾರ್ಥಿಗಳನ್ನ ಕುರಿತು ಮಾತಾಡುತ್ತಾ ಕನ್ನಡ ಕಾವ್ಯಸಂದರ್ಭದಲ್ಲಿ ಪಂಪನ ಕಾಲದಿಂದ ಅಡಿಗರವರೆಗಿನ ಸಾಹಿತ್ಯ ಅರಿವಿನ ಪರಿಚಯವಿತ್ತರು. ಸಂಜೆಯಾಗುತ್ತಿದ್ದಂತೆ ಕವಿಗಳಾದ ಚೇತನ ತೀರ್ಥಹಳ್ಳಿ, ವಿ.ಆರ್ ಕಾರ್ಪೆಂಟರ್, ಚಕ್ರವರ್ತಿ ಚಂದ್ರಚೂಡ, ರಂಗಕರ್ಮಿ ಯೋಗೇಶ್ ಮಾಸ್ಟರ್ ಕಾವ್ಯದೊಂದಿಗಿನ ಅವರ ಒಡನಾಟಗಳ ಬಗ್ಗೆ ಮಾತನಾಡಿದರು.
ಎರಡನೇ ದಿನ ನಟರಾಜ್ ಹುಳಿಯಾರ್ ಕಾವ್ಯ ಓದುವ ದಾರಿಗಳ ಬಗ್ಗೆ ಸುಧೀರ್ಘವಾಗಿ ಮಾತನಾಡಿದರು. ನಂತರ ಅತಿಥಿಗಳಾದ ಟಿ.ಎಲ್ಲಪ್ಪ, ಗಂಗಾಧರಯ್ಯ ಮಾಕಳ್ಳಿ, ಅಕ್ಷತ ಹುಂಚದಕಟ್ಟೆ ಕಾವ್ಯ ಪರಿಕರ ಇತ್ಯಾದಿ ವಿಷಯಗಳ ಬಗ್ಗೆ ಮಾತನಾಡಿದರು. ಮೂರನೇ ದಿನ ರಾಮಲಿಂಗಪ್ಪ ಬೇಗೂರು ಹಾಗೂ ಪ್ರತಿಭಾ ನಂದಕುಮಾರ್ ಶಿಬಿರಾರ್ಥಿಗಳಿಗೆ ಮುಖಾಮುಖಿಯಾದರು. ಕಾರ್ಯಕ್ರಮದ ಕೊನೆಯಲ್ಲಿ ಕಾಜಾಣ ಪುರಸ್ಕಾರವನ್ನ ಕವಿ ಗೊರವರ ಅವರಿಗೆ ನೀಡಿ ಸನ್ಮಾನಿಸಿ ಕಾರ್ಯಕ್ರಮವನ್ನ ಮುಗಿಸಲಾಯಿತು.
ಗೊಂದಲ ಹುಟ್ಟಿಕೊಂಡಿದ್ದು ಎಲ್ಲಿ..?
ನಾನು ಹೇಳಲೇ ಬೇಕಾದ ವಿಷಯವಿದು. ಕವಯತ್ರಿ ಪ್ರತಿಭಾ ನಂದಕುಮಾರ್ ಕಾವ್ಯದ ಬಗ್ಗೆ ಒಂದಷ್ಟು ಮಾತನಾಡಿ ಅವರೇ ಬರೆದ ಅದ್ಬುತ ಕವಿತೆಗಳನ್ನ ವಾಚಿಸಿದರು. ಅಕ್ಷರಶಃ ಎಲ್ಲಾ ಶಿಬಿರಾರ್ಥಿಗಳನ್ನ ಸೆಳೆಯುವಂತಿದ್ದವು ಅವರ ಮಾತು ಹಾಗೂ ಕವಿತೆಗಳು. ಹಿಂದೆ ಮಾತಾಡಿದ ಹಲವು ಕವಿಗಳು ತಮ್ಮ ಮಾತುಗಳಲ್ಲಿ ಉದಾಹರಣೆಯಾಗಿ ಪಂಪ, ರನ್ನ, ಕುಮಾರವ್ಯಾಸರನ್ನ ಪದೇ ಪದೇ ಹೆಸರಿಸಿ ಬೋರ್ ಹೊಡೆಸಿದ್ದಂತು ನಿಜ. ಆದರೆ ಪ್ರತಿಭಾ ನಂದಕುಮಾರ್ ಮಾತುಗಳಲ್ಲಿ ಆಧುನಿಕ ಸಮಸ್ಯೆಗಳಿಗೆ ಕಾವ್ಯ ಹೇಗೆ ಮುಖಾಮುಖಿಯಾಗಬೇಕೆಂಬುದನ್ನು ಉದಾಹರಣೆ ಸಹಿತ ವಿವರಿಸಿದರು. ಅವರ ಮಾತುಗಳು ಮುಗಿದ ನಂತರ ಸಂವಾದಕ್ಕೆ ಅವಕಾಶ ಒದಗಿಸಲಾಗಿತ್ತು. ಒಂದಿಬ್ಬರು ಪ್ರಶ್ನೆಗಳನ್ನು ಎತ್ತಿದರು. ಎಲ್ಲರ ಪ್ರಶ್ನೆಗಳು ಮುಗಿದ ಮೇಲೆ ಸ್ವತಃ ನಾನೇ ವೇದಿಕೆಗೆ ಹೋಗಿ ಮೂರು ದಿನಗಳಿಂದ ಹುಟ್ಟಿಕೊಂಡ ಹಲವು ಅನುಮಾನಗಳನ್ನ ಪ್ರಶ್ನಿಸ ಹೊರಟೆ. ಆ ಅನುಮಾನಗಳೆಂದರೆ
೧)ಪಂಪ, ರನ್ನರನ್ನೇ ಬೋರ್ ಹೊಡೆಯುವಷ್ಟು ಬಾರಿ ಹೆಸರಿಸಿದ ಕವಿಗಳು ಅಡಿಗರಿಂದೀಚೆಗಿನ ಸಾಹಿತ್ಯ ಹಾಗೂ ಸಾಹಿತಿಗಳ ಬಗ್ಗೆ ಮಾತಾನಾಡದಿದ್ದುದಕ್ಕೆ ಕಾರಣವೇನು?
೨)ಬಂಡಾಯ ಕಾವ್ಯ ನೆಲೆ ಕಳೆದುಕೊಂಡಿತು ಎಂಬುದು ನಿಜವ? ಹಾಗೇ ಬಂಡಾಯ ಸಾಹಿತ್ಯ ಅಪ್ರಸ್ತುತ ಎನ್ನುವುದಾದರೇ ಅದು ಹುಟ್ಟಿಹಾಕಿದ ಕ್ರಾಂತಿಗಳ ಕೊಡುಗೆ ಏನು ಇಲ್ಲವ? ನವೋದಯಗಳು ಭಾವಗೀತೆಗಳಾದರೆ ಬಂಡಾಯ ಕ್ರಾಂತಿಗೀತೆಗಳನ್ನು ಕೊಟ್ಟಿದ್ದು ನಿಜವಲ್ಲವ? (ಅತಿಥಿಯೊಬ್ಬರು ಬಂಡಾಯ ಸಾಹಿತ್ಯ ನೆಲೆ ಕಳೆದುಕೊಂಡು ಮೂಲೆ ಸೇರಿತು, ಇಂದಿಗೂ ನಾವು ನವೋದಯದ ಪದ್ಯಗಳನ್ನು ಹಾಡುತ್ತೇವೆ, ಎಂದಾಗ ಹುಟ್ಟಿಕೊಂಡ ಅನುಮಾನ)
೩) ಪಂಪನ ಕಾಲದಿಂದ ಇಲ್ಲಿಯವರೆಗೂ ಎಲ್ಲಾ ಕವಿಗಳು ಸಮಾಜದ ಹುಳುಕುಗಳನ್ನೇ ಟೀಕಿಸುತ್ತಾ ಬಂದಿದ್ದಾರೆ, ಆದರೆ ಅದು ಸಮಾಜದ ಮೇಲೆ ಪ್ರಭಾವ ಬೀರುವಲ್ಲಿ ಸಂಪೂರ್ಣ ಯಶವಾಗಿಲ್ಲ, ಎಂದು ಮುಕುಂದರಾಜರು ಅವರ ಭಾಷಣದಲ್ಲಿ ಹೇಳಿದರು. ಹಾಗಾದರೇ ಜನರಿಗೆ ಮುಟ್ಟುವಂತಹ ಸಾಹಿತ್ಯಕ್ಕಾಗಿ ಇಂದಿನ ಕವಿ ಪ್ರಯತ್ನಿಸಬೇಕಾಗುತ್ತದೆಯೆ?
ಇದಿಷ್ಟು ಪ್ರಶ್ನೆಗಳಿಟ್ಟುಕೊಂಡು ನಾನು ವೇದಿಕೆಯೇರಿದ್ದೆ. ನನ್ನ ಮೊದಲ ಪ್ರಶ್ನೆ ಶುರು ಮಾಡೋ ಮುಂಚೆಯೇ ಮುಕುಂದರಾಜರಿಗೆ ನನ್ನ ಪ್ರಶ್ನೆ ಚುಚ್ಚಿದಂತಾಯಿತು. ಏಕೆಂದರೆ ಧಾರಾವಾಡ ಸಮ್ಮೇಳನದಲ್ಲಿ ಹಳೆಗನ್ನಡ ಓದಬೇಕೆ ಬೇಡವೇ ಎಂಬೊಂದು ಚರ್ಚೆ ನಡೆದಿತ್ತು. ಇಲ್ಲಿಯೂ ಕೂಡ ಅಂತಹದ್ದೇ ಪ್ರಶ್ನೆ ಬಂದಿತ್ತಲ್ಲ ಎಂದು ತಪ್ಪಾಗಿ ತಿಳಿದು ಸಿಟ್ಟಾದರು. ಇಂತಹ ಪ್ರಶ್ನೆಯೊಂದೇ ಮೂರ್ಖತನದ್ದು ಎಂಬಂತೆ ಉತ್ತರಿಸಿದರು. ಆದರೆ ಉತ್ತರ ಏತ್ತರಿಸಿದ ಧ್ವನಿಯಲ್ಲಿತ್ತು, ವಾಗ್ಯುದ್ದ ನಡೆದಂತಯೇ. ಮಧ್ಯದಲ್ಲಿ ಮತ್ತಷ್ಟು ಶಿಬಿರಾರ್ಥಿಗಳ ಪರ ವಿರೋಧಗಳಂತೆ ಮಾತನಾಡಿ ಚರ್ಚೆ ವಿಷಯಾಂತರದತ್ತ ಸಾಗಿತ್ತು. ನಂತರ ಮತ್ತೊಮ್ಮೆ ಅವಕಾಶ ಕೇಳಿಕೊಂಡು ನನ್ನ ಸಮಸ್ಯೆಯನ್ನ ಅವರಿಗೆ ಮನವರಿಕೆ ಮಾಡಿಕೊಳ್ಳುವ ಪ್ರಯತ್ನ ಮಾಡಿದೆ. ಆದರೆ ಅಷ್ಟರಲ್ಲಾಗಲೇ ಸಮಯ ಮೀರಿ ಹೋಗಿದುದ್ದರಿಂದ ವೇದಿಕೆ ಬಿಟ್ಟು ಇಳಿಯಬೇಕಾಯಿತು. ನಂತರ ಮುಕುಂದರಾಜ್ ಸರ್ ಬಳಿ ನನ್ನ ಪ್ರಶ್ನೆಯನ್ನ ಅರ್ಥ ಮಾಡಿಸಿದೆ. ಕಮ್ಮಟದ ನಂತರ ಸಿಕ್ಕಿ ಒಂದಷ್ಟು ಚರ್ಚೆ ಮಾಡುವ ಭರವಸೆಯನ್ನಂತು ಕೊಟ್ಟರು. ಅಲ್ಲಿಗೆ ಸಮಾರೋಪದ ಸಮಯವಾಗಿ ಕಾರ್ಯಕ್ರಮದ ಅಂತ್ಯದ ಕಡೆ ಮುಖ ಮಾಡಿದೆವು.
ಆದರೆ ಫೇಸ್ಬುಕ್ನಲ್ಲಿ ನಡೆಯುತ್ತಿರುವ ವಾದಗಳೇನು?
ಅದೆಲ್ಲಾ ಸಾಹಿತ್ಯ ಸಂವಾದವೆಂದೇ ಕರೆಯಲಿಚ್ಚಿಸುತ್ತೇನೆ. ತಮ್ಮದೇ ಆದ ಸೈದ್ಧಾಂತಿಕ ದೃಷ್ಟಿಕೋನದಲ್ಲಿ ಅತಿಥಿಗಳ ಮಾತುಗಳನ್ನ, ತಮ್ಮಲ್ಲಿನ ಪ್ರಶ್ನೆ ಹಾಗೂ ಸಮಜಾಯಿಷಿಗಳನ್ನ ಎಲ್ಲರೂ ಕಾವ್ಯರೂಪದಲ್ಲೇ ವ್ಯಕ್ತಪಡಿಸುತ್ತಾ ವಾಗ್ವಾದಕ್ಕಿಳಿದರು. ಇದನ್ನ ಹಲವರು ಜಗಳವೆಂದೇ ತಿಳಿದರು. ಜಗಳವಲ್ಲದ ಇದು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಾಗಿವೆ. ಈ ತರಹದ ವಾಗ್ವಾದಗಳು ಕುವೆಂಪು ಮಾಸ್ತಿ ಕಾಲದಿಂದಲೂ ನಡೆಯುತ್ತಲೇ ಬಂದಿವೆ. ಆದರೆ ಒಂದು ಗಮನಿಸಬೇಕಾದ ಅಂಶವೆಂದರೆ ವಾದ-ವಿವಾದಗಳೆರಡು ಕಾವ್ಯದ ಮುಖಾಂತರವೇ ನಡೆಯುತ್ತಿರುವುದರಿಂದ ಕಮ್ಮಟದ ಪ್ರಭಾವದಿಂದ ಮತ್ತಷ್ಟು ಮೊನಚಾಗಿ ಬರೆಯುವಲ್ಲಿ ಶಿಬಿರಾರ್ಥಿಗಳು ತಮಗೆ ಗೊತ್ತಿಲ್ಲದೇ ತೊಡಗಿಕೊಂಡಿದ್ದಾರೆ. ಒಬ್ಬರನ್ನೊಬ್ಬರು ಕಾವ್ಯದ ಮುಖಾಂತರವೇ ಟೀಕಿಸುತ್ತಿರುವುದು ಆರೋಗ್ಯಕರ ಬೆಳವಣಿಗೆ. ಇದು ಸಂತೋಷದ ವಿಷಯವಲ್ಲದೇ ಮತ್ತೇನು.
ಕೊನೆಯದಾಗಿ…
ಕಾಜಾಣ ರೆಕ್ಕೆ ಮುರಿದುಕೊಂಡಿತು ಎಂದು ಒಂದಷ್ಟು ಮನಸ್ಸುಗಳು ಸಂತಸ ಪಟ್ಟವಂತೆ. ಅವರ ಮನಸ್ಥಿತಿಯ ಬಗ್ಗೆ ಕನಿಕರವಿದೆ. ಆದರೆ ಕಾಜಾಣ ಬಳಗ ಕಾವ್ಯ ಕಮ್ಮಟದಲ್ಲಿ ಹಾಜರಿದ್ದ ಶಿಬಿರಾರ್ಥಿಗಳ ಒಂದೊಂದು ಕವಿತೆಗಳನ್ನ ಸಂಗ್ರಹಿಸಿ “ಕಾವ್ಯ ಕಾಜಾಣ” ಎಂಬ ಹೊತ್ತಿಗೆಯನ್ನ ತರುವ ನಿರ್ಧಾರದಲ್ಲಿದೆ. ಅಲ್ಲದೇ ಕಮ್ಮಟ ಯಶಸ್ವಿ ನಡೆದ ಖುಷಿಗೆ ಗೆಟ್ ಟುಗೆದರ್ ತರಹದ ಸಣ್ಣದೊಂದು ಬೇಟಿಯನ್ನ ಆಯೋಜಿಸುವ ನಿಟ್ಟಿನಲ್ಲಿ ಯೋಚಿಸುತ್ತಿದೆ. ಅಲ್ಲಿ ನಮ್ಮ ಮುಂದಿನ ಕಾರ್ಯಕ್ರಮದ ಬಗ್ಗೆ ರೂಪರೇಷೆಯನ್ನು ತಯಾರಿಸಲಾಗುವುದು. ಮತ್ತಷ್ಟು ಕಲೆ, ಸಾಹಿತ್ಯದ ಕಾರ್ಯಕ್ರಮಗಳನ್ನ ಆಯೋಜಿಸುವುದರ ಮೂಲಕ ಕಾಜಾಣ ನಿಮ್ಮ ಜೊತೆಗಿರುತ್ತದೆ.
ಎರಡನೇ ದಿನ ನಟರಾಜ್ ಹುಳಿಯಾರ್ ಕಾವ್ಯ ಓದುವ ದಾರಿಗಳ ಬಗ್ಗೆ ಸುಧೀರ್ಘವಾಗಿ ಮಾತನಾಡಿದರು. ನಂತರ ಅತಿಥಿಗಳಾದ ಟಿ.ಎಲ್ಲಪ್ಪ, ಗಂಗಾಧರಯ್ಯ ಮಾಕಳ್ಳಿ, ಅಕ್ಷತ ಹುಂಚದಕಟ್ಟೆ ಕಾವ್ಯ ಪರಿಕರ ಇತ್ಯಾದಿ ವಿಷಯಗಳ ಬಗ್ಗೆ ಮಾತನಾಡಿದರು. ಮೂರನೇ ದಿನ ರಾಮಲಿಂಗಪ್ಪ ಬೇಗೂರು ಹಾಗೂ ಪ್ರತಿಭಾ ನಂದಕುಮಾರ್ ಶಿಬಿರಾರ್ಥಿಗಳಿಗೆ ಮುಖಾಮುಖಿಯಾದರು. ಕಾರ್ಯಕ್ರಮದ ಕೊನೆಯಲ್ಲಿ ಕಾಜಾಣ ಪುರಸ್ಕಾರವನ್ನ ಕವಿ ಗೊರವರ ಅವರಿಗೆ ನೀಡಿ ಸನ್ಮಾನಿಸಿ ಕಾರ್ಯಕ್ರಮವನ್ನ ಮುಗಿಸಲಾಯಿತು.
ಗೊಂದಲ ಹುಟ್ಟಿಕೊಂಡಿದ್ದು ಎಲ್ಲಿ..?
ನಾನು ಹೇಳಲೇ ಬೇಕಾದ ವಿಷಯವಿದು. ಕವಯತ್ರಿ ಪ್ರತಿಭಾ ನಂದಕುಮಾರ್ ಕಾವ್ಯದ ಬಗ್ಗೆ ಒಂದಷ್ಟು ಮಾತನಾಡಿ ಅವರೇ ಬರೆದ ಅದ್ಬುತ ಕವಿತೆಗಳನ್ನ ವಾಚಿಸಿದರು. ಅಕ್ಷರಶಃ ಎಲ್ಲಾ ಶಿಬಿರಾರ್ಥಿಗಳನ್ನ ಸೆಳೆಯುವಂತಿದ್ದವು ಅವರ ಮಾತು ಹಾಗೂ ಕವಿತೆಗಳು. ಹಿಂದೆ ಮಾತಾಡಿದ ಹಲವು ಕವಿಗಳು ತಮ್ಮ ಮಾತುಗಳಲ್ಲಿ ಉದಾಹರಣೆಯಾಗಿ ಪಂಪ, ರನ್ನ, ಕುಮಾರವ್ಯಾಸರನ್ನ ಪದೇ ಪದೇ ಹೆಸರಿಸಿ ಬೋರ್ ಹೊಡೆಸಿದ್ದಂತು ನಿಜ. ಆದರೆ ಪ್ರತಿಭಾ ನಂದಕುಮಾರ್ ಮಾತುಗಳಲ್ಲಿ ಆಧುನಿಕ ಸಮಸ್ಯೆಗಳಿಗೆ ಕಾವ್ಯ ಹೇಗೆ ಮುಖಾಮುಖಿಯಾಗಬೇಕೆಂಬುದನ್ನು ಉದಾಹರಣೆ ಸಹಿತ ವಿವರಿಸಿದರು. ಅವರ ಮಾತುಗಳು ಮುಗಿದ ನಂತರ ಸಂವಾದಕ್ಕೆ ಅವಕಾಶ ಒದಗಿಸಲಾಗಿತ್ತು. ಒಂದಿಬ್ಬರು ಪ್ರಶ್ನೆಗಳನ್ನು ಎತ್ತಿದರು. ಎಲ್ಲರ ಪ್ರಶ್ನೆಗಳು ಮುಗಿದ ಮೇಲೆ ಸ್ವತಃ ನಾನೇ ವೇದಿಕೆಗೆ ಹೋಗಿ ಮೂರು ದಿನಗಳಿಂದ ಹುಟ್ಟಿಕೊಂಡ ಹಲವು ಅನುಮಾನಗಳನ್ನ ಪ್ರಶ್ನಿಸ ಹೊರಟೆ. ಆ ಅನುಮಾನಗಳೆಂದರೆ
೧)ಪಂಪ, ರನ್ನರನ್ನೇ ಬೋರ್ ಹೊಡೆಯುವಷ್ಟು ಬಾರಿ ಹೆಸರಿಸಿದ ಕವಿಗಳು ಅಡಿಗರಿಂದೀಚೆಗಿನ ಸಾಹಿತ್ಯ ಹಾಗೂ ಸಾಹಿತಿಗಳ ಬಗ್ಗೆ ಮಾತಾನಾಡದಿದ್ದುದಕ್ಕೆ ಕಾರಣವೇನು?
೨)ಬಂಡಾಯ ಕಾವ್ಯ ನೆಲೆ ಕಳೆದುಕೊಂಡಿತು ಎಂಬುದು ನಿಜವ? ಹಾಗೇ ಬಂಡಾಯ ಸಾಹಿತ್ಯ ಅಪ್ರಸ್ತುತ ಎನ್ನುವುದಾದರೇ ಅದು ಹುಟ್ಟಿಹಾಕಿದ ಕ್ರಾಂತಿಗಳ ಕೊಡುಗೆ ಏನು ಇಲ್ಲವ? ನವೋದಯಗಳು ಭಾವಗೀತೆಗಳಾದರೆ ಬಂಡಾಯ ಕ್ರಾಂತಿಗೀತೆಗಳನ್ನು ಕೊಟ್ಟಿದ್ದು ನಿಜವಲ್ಲವ? (ಅತಿಥಿಯೊಬ್ಬರು ಬಂಡಾಯ ಸಾಹಿತ್ಯ ನೆಲೆ ಕಳೆದುಕೊಂಡು ಮೂಲೆ ಸೇರಿತು, ಇಂದಿಗೂ ನಾವು ನವೋದಯದ ಪದ್ಯಗಳನ್ನು ಹಾಡುತ್ತೇವೆ, ಎಂದಾಗ ಹುಟ್ಟಿಕೊಂಡ ಅನುಮಾನ)
೩) ಪಂಪನ ಕಾಲದಿಂದ ಇಲ್ಲಿಯವರೆಗೂ ಎಲ್ಲಾ ಕವಿಗಳು ಸಮಾಜದ ಹುಳುಕುಗಳನ್ನೇ ಟೀಕಿಸುತ್ತಾ ಬಂದಿದ್ದಾರೆ, ಆದರೆ ಅದು ಸಮಾಜದ ಮೇಲೆ ಪ್ರಭಾವ ಬೀರುವಲ್ಲಿ ಸಂಪೂರ್ಣ ಯಶವಾಗಿಲ್ಲ, ಎಂದು ಮುಕುಂದರಾಜರು ಅವರ ಭಾಷಣದಲ್ಲಿ ಹೇಳಿದರು. ಹಾಗಾದರೇ ಜನರಿಗೆ ಮುಟ್ಟುವಂತಹ ಸಾಹಿತ್ಯಕ್ಕಾಗಿ ಇಂದಿನ ಕವಿ ಪ್ರಯತ್ನಿಸಬೇಕಾಗುತ್ತದೆಯೆ?
ಇದಿಷ್ಟು ಪ್ರಶ್ನೆಗಳಿಟ್ಟುಕೊಂಡು ನಾನು ವೇದಿಕೆಯೇರಿದ್ದೆ. ನನ್ನ ಮೊದಲ ಪ್ರಶ್ನೆ ಶುರು ಮಾಡೋ ಮುಂಚೆಯೇ ಮುಕುಂದರಾಜರಿಗೆ ನನ್ನ ಪ್ರಶ್ನೆ ಚುಚ್ಚಿದಂತಾಯಿತು. ಏಕೆಂದರೆ ಧಾರಾವಾಡ ಸಮ್ಮೇಳನದಲ್ಲಿ ಹಳೆಗನ್ನಡ ಓದಬೇಕೆ ಬೇಡವೇ ಎಂಬೊಂದು ಚರ್ಚೆ ನಡೆದಿತ್ತು. ಇಲ್ಲಿಯೂ ಕೂಡ ಅಂತಹದ್ದೇ ಪ್ರಶ್ನೆ ಬಂದಿತ್ತಲ್ಲ ಎಂದು ತಪ್ಪಾಗಿ ತಿಳಿದು ಸಿಟ್ಟಾದರು. ಇಂತಹ ಪ್ರಶ್ನೆಯೊಂದೇ ಮೂರ್ಖತನದ್ದು ಎಂಬಂತೆ ಉತ್ತರಿಸಿದರು. ಆದರೆ ಉತ್ತರ ಏತ್ತರಿಸಿದ ಧ್ವನಿಯಲ್ಲಿತ್ತು, ವಾಗ್ಯುದ್ದ ನಡೆದಂತಯೇ. ಮಧ್ಯದಲ್ಲಿ ಮತ್ತಷ್ಟು ಶಿಬಿರಾರ್ಥಿಗಳ ಪರ ವಿರೋಧಗಳಂತೆ ಮಾತನಾಡಿ ಚರ್ಚೆ ವಿಷಯಾಂತರದತ್ತ ಸಾಗಿತ್ತು. ನಂತರ ಮತ್ತೊಮ್ಮೆ ಅವಕಾಶ ಕೇಳಿಕೊಂಡು ನನ್ನ ಸಮಸ್ಯೆಯನ್ನ ಅವರಿಗೆ ಮನವರಿಕೆ ಮಾಡಿಕೊಳ್ಳುವ ಪ್ರಯತ್ನ ಮಾಡಿದೆ. ಆದರೆ ಅಷ್ಟರಲ್ಲಾಗಲೇ ಸಮಯ ಮೀರಿ ಹೋಗಿದುದ್ದರಿಂದ ವೇದಿಕೆ ಬಿಟ್ಟು ಇಳಿಯಬೇಕಾಯಿತು. ನಂತರ ಮುಕುಂದರಾಜ್ ಸರ್ ಬಳಿ ನನ್ನ ಪ್ರಶ್ನೆಯನ್ನ ಅರ್ಥ ಮಾಡಿಸಿದೆ. ಕಮ್ಮಟದ ನಂತರ ಸಿಕ್ಕಿ ಒಂದಷ್ಟು ಚರ್ಚೆ ಮಾಡುವ ಭರವಸೆಯನ್ನಂತು ಕೊಟ್ಟರು. ಅಲ್ಲಿಗೆ ಸಮಾರೋಪದ ಸಮಯವಾಗಿ ಕಾರ್ಯಕ್ರಮದ ಅಂತ್ಯದ ಕಡೆ ಮುಖ ಮಾಡಿದೆವು.
ಆದರೆ ಫೇಸ್ಬುಕ್ನಲ್ಲಿ ನಡೆಯುತ್ತಿರುವ ವಾದಗಳೇನು?
ಅದೆಲ್ಲಾ ಸಾಹಿತ್ಯ ಸಂವಾದವೆಂದೇ ಕರೆಯಲಿಚ್ಚಿಸುತ್ತೇನೆ. ತಮ್ಮದೇ ಆದ ಸೈದ್ಧಾಂತಿಕ ದೃಷ್ಟಿಕೋನದಲ್ಲಿ ಅತಿಥಿಗಳ ಮಾತುಗಳನ್ನ, ತಮ್ಮಲ್ಲಿನ ಪ್ರಶ್ನೆ ಹಾಗೂ ಸಮಜಾಯಿಷಿಗಳನ್ನ ಎಲ್ಲರೂ ಕಾವ್ಯರೂಪದಲ್ಲೇ ವ್ಯಕ್ತಪಡಿಸುತ್ತಾ ವಾಗ್ವಾದಕ್ಕಿಳಿದರು. ಇದನ್ನ ಹಲವರು ಜಗಳವೆಂದೇ ತಿಳಿದರು. ಜಗಳವಲ್ಲದ ಇದು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಾಗಿವೆ. ಈ ತರಹದ ವಾಗ್ವಾದಗಳು ಕುವೆಂಪು ಮಾಸ್ತಿ ಕಾಲದಿಂದಲೂ ನಡೆಯುತ್ತಲೇ ಬಂದಿವೆ. ಆದರೆ ಒಂದು ಗಮನಿಸಬೇಕಾದ ಅಂಶವೆಂದರೆ ವಾದ-ವಿವಾದಗಳೆರಡು ಕಾವ್ಯದ ಮುಖಾಂತರವೇ ನಡೆಯುತ್ತಿರುವುದರಿಂದ ಕಮ್ಮಟದ ಪ್ರಭಾವದಿಂದ ಮತ್ತಷ್ಟು ಮೊನಚಾಗಿ ಬರೆಯುವಲ್ಲಿ ಶಿಬಿರಾರ್ಥಿಗಳು ತಮಗೆ ಗೊತ್ತಿಲ್ಲದೇ ತೊಡಗಿಕೊಂಡಿದ್ದಾರೆ. ಒಬ್ಬರನ್ನೊಬ್ಬರು ಕಾವ್ಯದ ಮುಖಾಂತರವೇ ಟೀಕಿಸುತ್ತಿರುವುದು ಆರೋಗ್ಯಕರ ಬೆಳವಣಿಗೆ. ಇದು ಸಂತೋಷದ ವಿಷಯವಲ್ಲದೇ ಮತ್ತೇನು.
ಕೊನೆಯದಾಗಿ…
ಕಾಜಾಣ ರೆಕ್ಕೆ ಮುರಿದುಕೊಂಡಿತು ಎಂದು ಒಂದಷ್ಟು ಮನಸ್ಸುಗಳು ಸಂತಸ ಪಟ್ಟವಂತೆ. ಅವರ ಮನಸ್ಥಿತಿಯ ಬಗ್ಗೆ ಕನಿಕರವಿದೆ. ಆದರೆ ಕಾಜಾಣ ಬಳಗ ಕಾವ್ಯ ಕಮ್ಮಟದಲ್ಲಿ ಹಾಜರಿದ್ದ ಶಿಬಿರಾರ್ಥಿಗಳ ಒಂದೊಂದು ಕವಿತೆಗಳನ್ನ ಸಂಗ್ರಹಿಸಿ “ಕಾವ್ಯ ಕಾಜಾಣ” ಎಂಬ ಹೊತ್ತಿಗೆಯನ್ನ ತರುವ ನಿರ್ಧಾರದಲ್ಲಿದೆ. ಅಲ್ಲದೇ ಕಮ್ಮಟ ಯಶಸ್ವಿ ನಡೆದ ಖುಷಿಗೆ ಗೆಟ್ ಟುಗೆದರ್ ತರಹದ ಸಣ್ಣದೊಂದು ಬೇಟಿಯನ್ನ ಆಯೋಜಿಸುವ ನಿಟ್ಟಿನಲ್ಲಿ ಯೋಚಿಸುತ್ತಿದೆ. ಅಲ್ಲಿ ನಮ್ಮ ಮುಂದಿನ ಕಾರ್ಯಕ್ರಮದ ಬಗ್ಗೆ ರೂಪರೇಷೆಯನ್ನು ತಯಾರಿಸಲಾಗುವುದು. ಮತ್ತಷ್ಟು ಕಲೆ, ಸಾಹಿತ್ಯದ ಕಾರ್ಯಕ್ರಮಗಳನ್ನ ಆಯೋಜಿಸುವುದರ ಮೂಲಕ ಕಾಜಾಣ ನಿಮ್ಮ ಜೊತೆಗಿರುತ್ತದೆ.
- ಶರತ್ ಚಕ್ರವರ್ತಿ

